13feb 2025- ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಎಂಬಿ ಪಾಟೀಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. 7 ವರ್ಷ ಅಲ್ಲ, 10 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರ ಚರ್ಚೆಗೆ ತಿರುಗೇಟು ನೀಡಿದ್ದಾರೆ.
7 ವರ್ಷ 7 ತಿಂಗಳುಗಳ ಕಾಲ ದೇವರಾಜ ಅಸರು ಸಿಎಂ ಆಗಿರುವ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿ ಎಂಬ ಡಾ. ಜಿ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಂಬಿ ಪಾಟೀಲ್ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದರು.
ದೇವರಾಜು ಅರಸು 7ವರ್ಷ 7 ತಿಂಗಳುಗಳ ಕಾಲ ಸಿಎಂ ಆಗಿದ್ದರು. ಸಿದ್ದರಾಮಯ್ಯನವರು ಪೂರ್ಣಾವಧಿ ಇರ್ತಾರೆ. ಏಳು ವರ್ಷಗಳಲ್ಲ 10ವರ್ಷ ಇರ್ತಾರೆ. ಹೈಕಮಾಂಡ್ ಸಿದ್ದರಾಮಯ್ಯನವರನ್ನ ಸಿಎಂ ಮಾಡಿದ್ದಾರೆ ಹಾಗಿರುವಾಗ ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಈ ಅವಧಿ ಪೂರೈಸಿ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೇವೆ. ಮುಂದಿನ ಬಾರಿಯ ನಾವು ಅಧಿಕಾರಕ್ಕೆ ಬರ್ತೇವೆ ಎಂದು ಇದೇ ಸಂದರ್ಭದಲ್ಲಿ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.ಮೆಟ್ರೋ ದರ ಇಳಿಸಿದ್ರೆ ಜನಸಾಮಾನ್ಯರಿಗೆ ಅನುಕೂಲ ಆಗುತ್ತೆ. ಬೆಂಗಳೂರು ಒತ್ತಡ ಕಡಿಮೆ ಆಗಬೇಕಾದರೆ ಸಬ್ ಅರ್ಬನ್ ರೈಲ್ವೇ, ಫೆರಿಫೆರಲ್ ರಿಂಗ್ ರೋಡ್ ಎಲ್ಲಾ ಆಗಬೇಕು ಎಂದು ಅಭಿಪ್ರಾಯ ಪಟ್ಟರು.ತೇಜಸ್ವಿ ಸೂರ್ಯ ಆರೋಪ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಕುಳಿತು ಚರ್ಚೆ ಮಾಡಬೇಕು. ಎರಡು ಸರ್ಕಾರ ಜನರ ಮೇಲೆ ಹೊರೆ ಆಗುವ ಕೆಲಸ ಮಾಡಬಾರದು. ನಮ್ಮ ರಾಜ್ಯದ ಭಾಗವನ್ನು ಸಿಎಂ ಹೇಳಿದ್ದಾರೆ. ರಾಜಕಾರಣ ಮಾಡಬೇಕಾದರೆ ಸಿಎಂ ಹೇಳಿದಂತೆ ಅವರು ಮಾಡಲಿ. ಸಿಎಂ ಪತ್ರ ಬರೆದಿಲ್ಲ ಎಂದರೆ ಈಗ ಅಧಿಕೃತವಾಗಿ ಹೇಳಿದ್ದಾರೆ . ನೀವು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಹೇಳಬೇಕಿತ್ತು. ರಾಜ್ಯ ಸರ್ಕಾರ ಕಡಿಮೆ ಮಾಡಿದ್ರೆ ನಾವು ಮಾಡ್ತೇವೆ ಎನ್ನಬೇಕಿತ್ತು. ನಿಮ್ಮವರು ಯಾಕಾಗಿ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.


